ಯಶ್ ಹೇಳಿದ ಭವಿಷ್ಯ ನಿಜವಾಯ್ತು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಬಾಯಲ್ಲೂ ‘ ರಂಗಿತರಂಗ’ ಚಲನಚಿತ್ರದ್ದೇ ಮಾತು . ಹೌದು ಈ ಚಲನಚಿತ್ರ ಮಾಡಿದ ಮೋಡಿಯೇ ಅಂತದ್ದು . ನಿರ್ದೇಶಕ ಅನೂಪ್ ಭಂಡಾರಿ ತನ್ನ ಮೊದಲನೇ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ . ‘ರಂಗಿತರಂಗ’ ಚಲನಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಚಲನಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ . ‘ ಬಾಹುಬಲಿ’ ಚಲನಚಿತ್ರ ಬಿಡುಗಡೆಯಾದರೂ ‘ ರಂಗಿತರಂಗ’ ಚಲನಚಿತ್ರವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ . ಚಿತ್ರರಂಗದ ಗಣ್ಯರು ಕೂಡಾ ಈ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ದೌಡಾಯಿಸುತ್ತಿದ್ದಾರೆ . ಈ ಚಲನಚಿತ್ರ ಬಿಡುಗಡೆಗೆ ಮುನ್ನವೇ ಕೇವಲ ಟ್ರೈಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅವರು ‘ ರಂಗಿತರಂಗ’ ಚಿತ್ರ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿದ್ದರು . ಯಶ್ ಏನಂದಿದ್ರು ? “ಒಂದು ಟ್ರೈಲರ್ ನಿಂದ ಆ ಚಿತ್ರದ ವ್ಯಾಲ್ಯೂ ಏನು ಅನೋದನ್ನ ನಾನು ನಂಬುತ್ತೇನೆ . ‘ ರಂಗಿತರಂಗ’ ಟ್ರೈಲರ್ ನೋಡಿ ಇಂಪ್ರೆಸ್ ಆಗಿದ್ದೇನೆ . ಹೊಸಬರ ಈ ಪ್ರಯತ್ನ ನೋಡಿ ತುಂಬಾನೇ ಖುಷಿಯಾಗ್ತಿದೆ . ಚಿತ್ರದ ಗುಣಮಟ್ಟದಲ್ಲಿ ತುಂಬಾನೇ ಮುಂದಿದ್ದಾರೆ . ಕನ್ನಡ ಇಂಡಸ್ಟ್ರಿಗೆ ಈ ರೀತಿಯ ಚಲನಚಿತ್ರಗಳು ಬರಬೇಕು . ಸಿ...