Posts

Showing posts from July, 2015
Image
ಯಶ್ ಹೇಳಿದ ಭವಿಷ್ಯ ನಿಜವಾಯ್ತು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಬಾಯಲ್ಲೂ ‘ ರಂಗಿತರಂಗ’ ಚಲನಚಿತ್ರದ್ದೇ ಮಾತು . ಹೌದು ಈ ಚಲನಚಿತ್ರ ಮಾಡಿದ ಮೋಡಿಯೇ ಅಂತದ್ದು . ನಿರ್ದೇಶಕ ಅನೂಪ್ ಭಂಡಾರಿ ತನ್ನ ಮೊದಲನೇ ಪ್ರಯತ್ನದಲ್ಲಿಯೇ ಗೆದ್ದಿದ್ದಾರೆ . ‘ರಂಗಿತರಂಗ’ ಚಲನಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಚಲನಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ ಎಲ್ಲೆಡೆ ಹೌಸ್ ‌ ಫುಲ್ ಪ್ರದರ್ಶನ ಕಾಣುತ್ತಿದೆ . ‘ ಬಾಹುಬಲಿ’ ಚಲನಚಿತ್ರ ಬಿಡುಗಡೆಯಾದರೂ ‘ ರಂಗಿತರಂಗ’ ಚಲನಚಿತ್ರವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ . ಚಿತ್ರರಂಗದ ಗಣ್ಯರು ಕೂಡಾ ಈ ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ದೌಡಾಯಿಸುತ್ತಿದ್ದಾರೆ . ಈ ಚಲನಚಿತ್ರ ಬಿಡುಗಡೆಗೆ ಮುನ್ನವೇ ಕೇವಲ ಟ್ರೈಲರ್ ನೋಡಿ ರಾಕಿಂಗ್ ಸ್ಟಾರ್ ಯಶ್ ಅವರು ‘ ರಂಗಿತರಂಗ’ ಚಿತ್ರ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿದ್ದರು . ಯಶ್ ಏನಂದಿದ್ರು ? “ಒಂದು ಟ್ರೈಲರ್ ‌ ನಿಂದ ಆ ಚಿತ್ರದ ವ್ಯಾಲ್ಯೂ ಏನು ಅನೋದನ್ನ ನಾನು ನಂಬುತ್ತೇನೆ . ‘ ರಂಗಿತರಂಗ’ ಟ್ರೈಲರ್ ನೋಡಿ ಇಂಪ್ರೆಸ್ ಆಗಿದ್ದೇನೆ . ಹೊಸಬರ ಈ ಪ್ರಯತ್ನ ನೋಡಿ ತುಂಬಾನೇ ಖುಷಿಯಾಗ್ತಿದೆ . ಚಿತ್ರದ ಗುಣಮಟ್ಟದಲ್ಲಿ ತುಂಬಾನೇ ಮುಂದಿದ್ದಾರೆ . ಕನ್ನಡ ಇಂಡಸ್ಟ್ರಿಗೆ ಈ ರೀತಿಯ ಚಲನಚಿತ್ರಗಳು   ಬರಬೇಕು . ಸಿ...
Image
ತುಳು ಚಿತ್ರದಲ್ಲೂ ನಟಿಸಲು ರೆಡಿ ಎಂದ ರಾಗಿಣಿ “ಉಳಿದ ಚಿತ್ರರಂಗದಂತೆಯೇ ತುಳು ಚಲನಚಿತ್ರ ರಂಗ ಕೂಡಾ ಬೆಳೆಯುತ್ತಿದೆ . ತುಳುವಿನಲ್ಲೂ ಅನೇಕ ಒಳ್ಳೆಯ ಚಲನಚಿತ್ರಗಳು ಬರುತ್ತಿದೆ . ಒಂದು ವೇಳೆ ತುಳು ಭಾಷೆಯಲ್ಲಿ ನಟಿಸುವ ಅವಕಾಶ ಸಿಕ್ಕರೆ ನಾನು ರೆಡಿ” ಎಂದು ನಾಯಕಿ ರಾಗಿಣಿ ದ್ವಿವೇದಿ ಹೇಳಿದ್ದಾರೆ . ‘ ಜುಗಾರಿ ’ ಬಲಿಪೆರ ಇಜ್ಜಿ ಎಂಬ ತುಳು ತುಳು ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡ ತುಪ್ಪದ ಬೆಡಗಿ ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದಲ್ಲಿ ನಾಯಕಿ ಪ್ರಧಾನವಾದ ಚಲನಚಿತ್ರಗಳು ಬರುತ್ತಿದೆ . ನಾನು ಕೂಡಾ ಈ ಹಿಂದೆ ‘ ರಾಗಿಣಿ ಐ . ಪಿ . ಎಸ್’ ಚಲನಚಿತ್ರದಲ್ಲಿ ನಟಿಸಿದ್ದೇನೆ . ಈ ಚಿತ್ರಕ್ಕೆ ಉತ್ತಮ ಮನ್ನಣೆ ದೊರೆಯಿತು . ಸದ್ಯ ‘ ವೀರ ರಣಚಂಡಿ ’ ಚಲನಚಿತ್ರದಲ್ಲಿ ನಟಿಸಿದ್ದು ಅಗಷ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು . ಜುಗಾರಿ ’ ಬಲಿಪೆರ ಇಜ್ಜಿ ಚಲನಚಿತ್ರದಲ್ಲಿ ನಾಯಕನಾಗಿ ‘ ಯಶೋದೆ ’ ಧಾರವಾಹಿಯ ನಟ ಕಾರ್ತಿಕ್ ಅತ್ತಾವರ್ ನಟಿಸುತ್ತಿದ್ದು ನಾಯಕಿಯಾಗಿ ಎಸ್ತೇರ್ ನರೋನ್ಹಾ ನಟಿಸುತ್ತಿದ್ದಾರೆ . ಉಳಿದಂತೆ ಅಮಿತ್ ರಾವ್ , ನವೀನ್ ಡಿ . ಪಡೀಲ್ , ಅರವಿಂದ ಬೋಳಾರ್ , ಭೋಜರಾಜ ವಾಮಂಜೂರ್ ಮುಂತಾದವರು ತಾರಾಗಣದಲ್ಲಿದ್ದಾರೆ . ಈ ಹಿಂದೆ ರಾಷ್ಟ್ರ ಪ್ರಶಸ್ತಿ ವಿಜೇತ ‘ ಕೋಟಿ ಚೆನ್ನಯ ’ ಚಲನಚಿತ್ರವನ್ನು...
Image
ಮನ’ಮೋಹನ ’  ಸಂಕಲನ ಒಂದು ಚಲನಚಿತ್ರವನ್ನು ಎರಡು ಘಂಟೆ ನೋಡಿ ನಾವು ಆನಂದ ಪಡ್ತೀವಿ . ಆದರೆ ಆ ರೀತಿ ಮೂಡಿ ಬರಲು ತಂತ್ರಜ್ಞರ ಸಹಕಾರ ಬಹುಮುಖ್ಯ . ಅದರಲ್ಲಿ ಎಡಿಟಿಂಗ್ ಕೆಲಸವಿಲ್ಲದಿದ್ದರೆ ಚಲನಚಿತ್ರವು ಸಂಪೂರ್ಣವಾಗಲಾರದು . ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಪ್ರತಿಭಾವಂತ ಸಂಕಲನಕಾರರಿದ್ದಾರೆ ಅಂತಹವರ ಪೈಕಿ ಮೋಹನ್ ಕಾಮಾಕ್ಷಿ ಕೂಡಾ ಒಬ್ಬರು .   ಮೂಲತಃ ಬೆಂಗಳೂರಿನವರಾದ ಇವರಿಗೆ ನಿರ್ದೇಶಕರಾಗಬೇಕೆಂಬ ಅತೀವ ಆಸಕ್ತಿ ಇತ್ತು . ಆದರೆ ಇಳಿದದ್ದು ಎಡಿಟಿಂಗ್ ವಿಭಾಗಕ್ಕೆ, ಆದರೇನಂತೆ ಅಲ್ಲೂ ಸಕ್ಸಸ್ . ಮೋಹನ್ ಕಾಮಾಕ್ಷಿ ಅವರು ‘ ಡೈರೆಕ್ಟರ್ ಸ್ಪೆಷಲ್ ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ . ಜೊತೆ ಇವರ ನಿರ್ದೇಶನದ ಹೊಸದೊಂದು ಚಿತ್ರದ ಮಾತುಕತೆ ಕೂಡಾ ನಡೆಯುತ್ತಿದೆ . ‘ ಹುಡುಗರು ’, ‘ ಯಾರೇ ಕೂಗಾಡಲಿ ’ ಚಲನಚಿತ್ರದ ಮೂಲ ತಮಿಳು ಭಾಷೆಯಾಗಿದ್ದು ಈ ಭಾಷೆಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ . ಇವರ ಪ್ರತಿ ಕೆಲಸದ ಹಿಂದೆ ತಂದೆ ವರದರಾಜ್ ತಾಯಿ ಅಣ್ಣಮ್ಮ ಮತ್ತು ಪತ್ನಿ ಧನಲಕ್ಷ್ಮೀ ಅವರ ಪ್ರೋತ್ಸಾಹವಿದೆ . ಬಹುಮುಖ ಪ್ರತಿಭೆಯಾದ ಮೋಹನ್ ಕಾಮಾಕ್ಷಿ ಅವರು ತಮ್ಮ ಮನದಾಳದ ಮಾತನ್ನು ‘ ಬಾಲ್ಕನಿ ಡಾಟ್ ಕಾಮ್ ’ ಜೊತೆಹಂಚಿಕೊಂಡದ್ದು ಹೀಗೆ : ಸಂಕಲನ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ...
Image
ಸುದೀಪ್ ಜೊತೆ ನಟಿಸ್ತಾರಾ ಶಿವಣ್ಣ ? ಕಳೆದ ವಾರ ಸಟ ಸುದೀಪ್ ಅಭಿನಯ ‘ ರನ್ನ ’ ಚಿತ್ರ ಬಿಡುಗಡೆಗೊಂಡಿದ್ದು ಬಾಕ್ಸ್ ‌ ಆಫೀಸ್ ‌ ನ್ನು ಕೊಳ್ಳೆ ಹೊಡೆಯುತ್ತಿದೆ . ಇದೇ ಸಂದರ್ಭದಲ್ಲಿ ಸುದೀಪ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ನಾನು ಮತ್ತು ಶಿವಣ್ಣ ಒಳ್ಳೆಯ ಸ್ನೇಹಿತರು . ನಾನು ಕಾಲೇಜು ದಿನಗಳಿಂದ ಶಿವಣ್ಣ ಅವರ ಚಿತ್ರವನ್ನು ನೋಡಿ ಬೆಳೆದವನು ಎಂದು ಹೇಳಿದ್ದರು . ನಟ ಶಿವರಾಜ್ ಕುಮಾರ್ ಅವರು ತಾನು ನಟಿಸುತ್ತಿರುವ ಮುಂದಿನ ವಾರ ತೆರೆ ಕಾಣಬೇಕಾದ ‘ ವಜ್ರಕಾಯ ’ ಸಿನಿಮಾದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ‘ ನಾನು ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು . ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಕೇವಲ ಗಾಳಿಸುದ್ದಿ . ಇದನ್ನು ಅಭಿಮಾನಿಗಳು ನಂಬಬೇಡಿ’ ಎಂದು ಹೇಳಿದ್ದಾರೆ . ನಮ್ಮ ನಡುವೇ ಯಾವುದೇ ರೀತಿಯಲ್ಲಿ ಸ್ಟಾರ್ ‌ ವಾರ್ ಇಲ್ಲ . ಈ ಹಿಂದೆ ಸುದೀಪ್ ನಿರ್ದೇಶಿಸಿದ್ದ ‘ ಶಾಂತಿನಿವಾಸ ’ ಚಿತ್ರದಲ್ಲಿಯೂ ಪೋಷಕ ನಟನಾಗಿ ನಾನು ಕಾಣಿಸಿಕೊಂಡಿದ್ದೆ . ನಮ್ಮ ಕುಟುಂಬದ ಬಗ್ಗೆ ಸುದೀಪ್ ಅವರಿಗೆ ತುಂಬಾನೇ ಗೌರವವಿದೆ . ನನ್ನ ಪತ್ನಿ ಗೀತಾ ಮಾಡುವ ಅಕ್ಕಿರೊಟ್ಟಿ ಎಂದರೆ ಸುದೀಪ್ ‌ ಗೆ ತುಂಬಾ ಇಷ್ಟ ಎಂದಿದ್ದಾರೆ . ನನ್ನ ನಟನೆಯ ‘ ವಜ್ರಕಾಯ ’ ಚಲನಚಿತ್ರವನ್ನು ...
Image
‘ಚಾಲಿಪೋಲಿಲು’ ತುಳು ಚಿತ್ರ 250 ದಿನಗಳ ಪ್ರದರ್ಶನ   ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲವಾಗಿದ್ದು ಅನೇಕ ಚಲನಚಿತ್ರಗಳು ತೆರೆ ಕಾಣುತ್ತಿವೆ . ಈ   ಪೈಕಿ   ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣದ ‘ ಚಾಲಿಪೋಲಿಲು ’ ಚಲನಚಿತ್ರವೂ ಒಂದು . ಈ ಚಿತ್ರಕ್ಕೆ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ   ನಿರ್ದೇಶನವಿದ್ದು ಮಲ್ಟಿಪ್ಲೆಕ್ಸ್ ನಲ್ಲಿ ಈ ಚಿತ್ರವು ಇಂದಿಗೆ 250 ದಿನಗಳನ್ನು ಪೂರೈಸಿ ದಾಖಲೆಗೆ ಕಾರಣವಾಗಿದೆ .     ಕೇವಲ 60 ಲಕ್ಷ ಬಜೆಟ್ ‌ ನಲ್ಲಿ ತಯಾರಾದ ‘ ಚಾಲಿಪೋಲಿಲು’ ಚಿತ್ರವು ಈ ಹಿಂದೆ 5 ಚಿತ್ರಮಂದಿರಗಳಲ್ಲಿ 75 ದಿನ ಮತ್ತು 3 ಚಿತ್ರಮಂದಿರದಲ್ಲಿ 100 ದಿನಗಳಿಗೂ ಮಿಕ್ಕಿ ಪ್ರದರ್ಶನ ಕಂಡಿತ್ತು . ಪ್ರಸ್ತುತ ಪಾಂಡೇಶ್ವರ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ದಿನಂಪ್ರತಿ   ಪ್ರದರ್ಶನ ಕಾಣುತ್ತಿದ್ದು , ಇಂದಿಗೆ 250ನೇ ದಿನದ ಪ್ರದರ್ಶನ ನೀಡಿದೆ . ದೇಶವ್ಯಾಪಿಯಾಗಿ ಇರುವ ಪಿ.ವಿ.ಆರ್ ‌ ನ   ಯಾವುದೇ ಚಿತ್ರಮಂದಿರದಲ್ಲಿ ಪ್ರಾದೇಶಿಕ ಭಾಷೆಯ   ಸಿನಿಮಾವೊಂದು ಈ ರೀತಿಯ ಪ್ರದರ್ಶನ ಕಂಡಿರಲಿಲ್ಲ . ಈ ಹಿಂದೆ ನಡೆದ ತುಳು ಸಿನಿಮಾ ಪ್ರಶಸ್ತಿ ಸ್ಪರ್ಧೆಯಲ್ಲಿ   ‘ ಚಾಲಿಪೋಲಿಲು ’ 8 ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು . ಹೊಸ...