ಚಿನ್ನದ ಹುಡುಗಿ ಅಕ್ಷತಾ ಪೂಜಾರಿ ಆಕೆ ತೀರಾ ಗ್ರಾಮೀಣ ಪ್ರತಿಭೆ, ಜೊತೆಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಈ ಬೇಗೆಯ ನಡುವೆ ಕಳೆದ ವರ್ಷ ಲಂಡನ್ ನಲ್ಲಿ ನಡೆದ ಕಾಮನ್ವೆಲ್ತ್ ಪವರ್ಲಿಪ್ಟಿಂಗ್ ಚಾಂಪಿಯನ್ಷಿಪ್ ನಲ್ಲಿ ಸ್ಪರ್ದಿಸಿ, ಎಂಟು ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿದ ಅಕ್ಷತಾ ಪೂಜಾರಿ ಇಂದು ಎಲ್ಲರ ಮನೆ ಮಾತು. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಭೋಜ ಪೂಜಾರಿ ಮತ್ತು ಪ್ರೇಮ ಪೂಜಾರಿ ದಂಪತಿಯ ಪುತ್ರಿಯಾದ ಈಕೆಗೆ ಬಾಲ್ಯಾವಸ್ಥೆಯಲ್ಲಿಯೇ ಕ್ರೀಡಾಕ್ಷೇತ್ರದತ್ತ ಅತೀವ ಆಸಕ್ತಿ; ಮೋದಮೊದಲು ಶಾಲಾಮಟ್ಟದಲ್ಲಿ ಲಾಂಗ್ರೇಸ್ ಸ್ಪರ್ದೆಯಲ್ಲಿ ಮುಂಚೂಣಿಯಲ್ಲಿದ್ದ ಅಕ್ಷತಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಮನ್ನಣೆ ಪಡೆದಿರುವಳು. ಅದೃಷ್ಟ ಬದಲಿಸಿದ ಕೋಚ್ ಸಲಹೆ: ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ’ಹ್ಯಾಮರ್ ಥ್ರೋ’ ಕ್ರೀಡೆಯತ್ತ ಈಕೆಗೆ ಒಲವಿತ್ತು. ನಿಟ್ಟೆಯ ಕರುಣಾಕರ ಶೆಟ್ಟಿ ಯವರಲ್ಲಿ ತರಬೇತಿ ಪಡೆದು ಸತತ ಮೂರು ವರ್ಷ ರಾಷ್ಟ್ರಮಟ್ಟದಲ್ಲಿ ಸ್ಪರ್ದಿಸಿ ಹ್ಯಾಟ್ರಿಕ್ ಚಿನ್ನದ ಪದಕವನ್ನು ಸಂಪಾದಿಸಿದಳು. ಇದಲ್ಲದೆ ವಿಶ್ವವಿದ್ಯಾನಿಲಯ ವಲಯ,ತಾಲೂಕು,ಜಿಲ್ಲಾಮಟ್ಟದಲ್ಲೂ ಹಲವಾರು ಪದಕಗಳು ಈಕೆಯ ಕೊರಳಿಗಿದೆ. ನಿಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಯ ಸಂದರ್ಭದಲ್ಲ...
Posts
Showing posts from May, 2012
- Get link
- X
- Other Apps
ಅಖಿಲಾಳ ಸಫಲ ಪಯಣ ಈಕೆ ಕಿಲ-ಕಿಲ ನಗುವಿನೊಡನೆ ವೇದಿಕೆಗೆ ಕಾಲಿಟ್ಟರೆ ಸಾಕು, ಪ್ರತಿಸ್ಪರ್ಧಿಗಳ ಎದೆಯಲ್ಲಿ ನಡುಕ, ಈಕೆಯ ಹಾಡಿನ ಧಾಟಿಗೆ ತಲೆದೂಗದವರೇ ಕಡಿಮೆ, ಹಾಡಿನೊಡನೆ ಮುಖದ ಭಾವನೆಯಲ್ಲೂ ಮಿಂಚು ಹರಿಸುವ ಈಕೆ ಝೀ ಕನ್ನಡ ವಾಹಿನಿಯ ಸರಿಗಮಪ ವಿಜೇತೆ ಅಖಿಲಾ. ತನ್ನ ನಾಲ್ಕನೇ ವಯಸ್ಸಲ್ಲೇ ಸಂಗೀತ ಪಯಣವನ್ನು ವಿಹರಿಸಲು ಪ್ರಾರಂಭಿಸಿದ ಈಕೆಗೆ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮಟ್ಟದ ತಳಹದಿ ಹಾಕಿದವರಂದರೆ ಶ್ರೀಮತಿ ರಾಜೇಶ್ವರೀ ರಮೇಶ್, ಜೊತೆ ಸಂಗೀತದ ಸೀನಿಯರ್ ವಿಭಾಗವನ್ನು ಶ್ರೀಮತಿ ಮಾನಸ ಪದ್ಯಾಣರ ಶಿಷ್ಯೆಯಾಗಿ ಕಲಾಕಂಪು ಬೀರುತ್ತಾಳೆ. ಈಕೆಯ ಜೀವನದ ಬಹುದೊಡ್ಡ ಸಾಧನೆಗೆ ಸಾಕ್ಷಿಯಾಗಿದ್ದು ಝೀ ಕನ್ನಡದ ಸರಿಗಮಪ ವೇದಿಕೆ. ಈ ವೇದಿಕೆಯಲ್ಲಿ ಎಮ್.ಡಿ ಪಲ್ಲವಿ, ಗುರುಕಿರಣ್, ರಘುದೀಕ್ಷಿತ್ ರವರಲ್ಲದೆ ಇತರೆ ಅನೇಕ ಹಿನ್ನಲೆ ಗಾಯಕರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಸೂಚಕವಾಗಿ ಹನ್ನೊಂದು ಬಾರಿ ’ ಬೆಸ್ಟ್ ಫರ್ಫಾರ್ಮೆನ್ಸ್’ ಅವಾರ್ಡ್ ಈಕೆಯ ಮಡಿಲಿಗೆ ಬಂದೊದಗಿತ್ತು. ಇದರೊಡನೆ ಹಿಂದ...
- Get link
- X
- Other Apps
ವೃತ್ತಿಯಲ್ಲಿ ಡಾಕ್ಟರ್ ಆದ್ರೂ ಸಿಂಗರ್...!!! ಸಂಗೀತ ಕ್ಷೇತ್ರವೇ ಹಾಗೆ, ಯಾರನ್ನು ಯಾವ ರೀತಿಯಾಗಿ ಸೆಳೆಯುತ್ತದೆ ಎಂದು ಊಹಿಸಲೂ ಅಸಾದ್ಯ; ಅಂತಹಾ ತಾಜಾ ಉದಾಹರಣೆಗೆ ಸಾಕ್ಷಿ ನಿತಿನ್ ಆಚಾರ್ಯ. ಮೂಲತಃ ಕರಾವಳಿ ತಡಿಯವರಾದ ಇವರು ವೃತ್ತಿಯಲ್ಲಿ ವೈದ್ಯರು. ಸ್ಟೆತಸ್ಕೋಪ್ ಹಿಡಿಯುವ ಕೈ ಯಲ್ಲಿ ಮೈಕ್ ಹಿಡಿದರಂತೂ ಕಂಠದಿಂದ ಹೊರಹೊಮ್ಮುವ ಶುಶ್ರಾವ್ಯ ಹಾಡಿಗೆ ಮನಸೋಲದವರೇ ಕಡಿಮೆ. ಹಾಡುಗಾರಿಕೆಯ ಹವ್ಯಾಸ ನಿತಿನ್ ರಿಗೆ ಬಾಲ್ಯದಲ್ಲೇ ಇತ್ತು, ಆದರೆ ಹೆಚ್ಚಿನ ತಳಹದಿಗೆಂದು ಗುರುಗಳನ್ನು ಅರಸಿ ಹೋದವರಲ್ಲ; ತನ್ನ ಸ್ವಂತ ಅಬಿರುಚಿಯಿಂದಲೇ ಕಲಿಯುತ್ತಿದ್ದ ನಿತಿನ್ ಇಂದು ರಾಜ್ಯಾದ್ಯಂತ ಪರಿಚಿತ. ನಿತಿನ್ ರವರ ಜೀವನ ಟರ್ನಿಂಗ್ ಪಾಯಿಂಟ್ ಎಂದರೆ ಈ ಟಿ.ವಿ ವಾಹಿನಿಯ ಎದೆ ತುಂಬಿ ಹಾಡುವೆನು ಸೀಸನ್-೧ ಕಾರ್ಯಕ್ರಮ. ಗುರುಗಳ ಅಲಬ್ಯತೆಯ ನಡುವೆಯೂ ಕ್ವಾರ್ಟರ್ ಪೈನಲ್ ವರೆಗೂ ಸ್ಪರ್ದಿಸಿದ ಹೆಗ್ಗಳಿಕೆ ಇವರದ್...