Posts

Showing posts from August, 2012
Image
       ಗ್ರಾಮೀಣ ಪ್ರದೇಶದ ಅಪರೂಪದ ವ್ಯಕ್ತಿ          ವೃತ್ತಿಯಲ್ಲಿ ಅಧ್ಯಾಪಕರಾಗಿದ್ದುಕೊಂಡು ಕೃಷಿಯೊಡನೆಯ ಇವರ ನಂಟು ಮೆಚ್ಚಲೇ ಬೇಕು; ಜೊತೆ ಅಳಿದುಳಿದ ಸಮಯವನ್ನು ಪೋಲುಮಾಡದೆ ಹಲವು ಹವ್ಯಾಸದತ್ತ ತೊಡಗಿಸಿರುವ ಅಪರೂಪದ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಗ್ರಾಮದ ವೆಂಕಟರಮಣ ಭಟ್. ಇವರು ಪರಿಸರ ರಕ್ಷಣೆಗೆ ನೀಡುವ ಉತ್ತೇಜನವನ್ನು ಶ್ಲಾಘಿಸಲೇಬೇಕು. ಮರಗಳನ್ನು ಕಡಿದು ನಾಶಪಡಿಸುವ ಇಂದಿನ ಜಮಾನದಲ್ಲಿ ತನ್ನ ಸುತ್ತಲಿನ ಪರಿಸರವನ್ನು ಹಸಿರು ಮುಕ್ತವಾಗಿರಿಸಿರುವುದು ಪರಿಸರದೊಡನೆಯ ಇವರ ನಂಟನ್ನು ಎತ್ತಿ ತೋರಿಸುತ್ತದೆ.          ಸುಮಾರು ನಲವತೈದು ವರ್ಷದ ಹಿಂದೆ ಮರುಭೂಮಿಯಂತಿದ್ದ ಭೂಮಿಯನ್ನು ತೋಟವಾಗಿ ಮಾರ್ಪಡಿಸಿ ಮೂರು ಸಾವಿರದಷ್ಟು ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಸಾಮಾನ್ಯವಾಗಿ ಹಳ್ಳಿ ಮದ್ದಿನಲ್ಲಿ  ಬಳಸುವ ಔಷಧಿ ಗಿಡಗಳು ಸದಾ ಇವರ ಮನೆ ಮುಂದೆ ಲಬ್ಯ; ಅದರಲ್ಲೂ ಅಳಿವಿನಂಚಿನಲ್ಲಿರು ಹಲವು ಗಿಡಗಳನ್ನು ಪೋಷಿಸುತ್ತಿರುವ ಭಟ್ಟರದ್ದು ವಿಶೇಷ ಸಾಧನೆಯೇ ಸರಿ. ಇವರ ತೋಟದಲ್ಲಿ ಪುಷ್ಪ ಸಾಮ್ರಾಜ್ಯಕ್ಕೂ ಜಾಗವಿದೆ. ೨೫ ರೀತಿಯ ಬೆಟ್ಟದಾವರೆ, ಟುಡೆ ಟುಮಾರೋ ಯೆಸ್ಟರ್‌ಡೇ ಎಂಬಂತಹ ಅಪರೂಪದ ಗಿಡವಿದ್ದು ಇದರ ಹೂವು ಮೂರು ದಿನ ಮೂರು ಬಣ್ಣಗಳಲ್ಲಿ ಕಂಗಳಿಸುತ್ತದೆ. ’ಕೂವೆ’ ಎಂಬ...
Image
                                       ಒಮ್ಮೆ ಬನ್ನಿ 'ದೇವರಗುಂಡಿಗೆ'         ಸುತ್ತಲೂ ಕಾನನ. ಸುಮಾರು ಅರ್ಧ ಕಿಲೋ ಮೀಟರ್ ಹಿಂದೆಯೇ ನೀರಿನ ಜುಳು ಜುಳು ನಾದದ ದನಿ. ಕುತೂಹಲದಿಂದ ಹಾಗೆಯೇ ಕಾಲಳತೆಯ ದೂರ ಕ್ರಮಿಸಿದರೆ ಮನದಲ್ಲಿ ಜುಂ..! ಆಗುವುದಂತೂ ಖಂಡಿತ. ಏಕಂತೀರಾ ಸುಮಾರು ೧೦ ರಿಂದ ೧೫ ಅಡಿ ಎತ್ತರದಿಂದ ಬೀಳುವ ನೀರಿನ ಜಲಧಾರೆ. ಅಂದ ಹಾಗೆ ಇದು ದೇವರಗುಂಡಿ ಜಲಪಪಾತದ ಸೊಬಗು.  ಈ ಜಲಪಾತವಿರುವುದು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿನಾಡ ಭಾಗದಲ್ಲಿ. ಸುಳ್ಯ ಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಸುಮಾರು ಹನ್ನೊಂದು ಕಿಲೋಮೀಟರ್ ಸಾಗಿದರೆ ಅರಂತೋಡು ಎಂಬ ಪುಟ್ಟ ಪಟ್ಟಣ ಸಿಗುತ್ತದೆ. ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಕೇವಲ ಆರು ಕಿಲೋ ಮೀಟರ್ ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ.  ದೇವಾಲಯದ ದರುಷನ ಮಾಡಿ ಇದೇ ರಸ್ತೆಯಲ್ಲೇ ಹದಿನೈದು ನಿಮಿಷ ಕಾಲ್ನಡಿಗೆಯಲ್ಲೇ ಹೋದರೆ  ’ಅಮೆ ಮನೆ’ ಎಂಬ ಮನೆ ಸಿಗುತ್ತದೆ. ಇಲ್ಲಿಂದ ಅಡಿಕೆ ಹಾಗೂ ಏಲಕ್ಕಿ ತೋಟದಲ್ಲಿ ಸಾಗಿದರೆ ಕೇವಲ ಐದೇ ನಿಮಿಷದಲ್ಲಿ ದೇವರಗುಂಡಿ  ಜಲಧಾ...
Image
                                      'ನೇಹಾ'ಳ ಕಲಾ ಪ್ರೇಮ           ಹಾಡುವಿಕೆ ಇರಲಿ ಕುಣಿಯುವಿಕೆ ಇರಲಿ ಈಕೆಗೆ ಪ್ರಿಯ. ಈಕೆಯ ನವಿರಾದ ಕುಂಚದಿಂದ ಹೊರಹೊಮ್ಮಿದ ಚಿತ್ರವನ್ನು ನೋಡುವುದೇ ಅಂದ. ಕಲಿಯುವಿಕೆಯಲ್ಲಂತೂ ಬ್ರಿಲಿಯೆಂಟ್ ಸ್ಟೂಡೆಂಟ್ ಜೊತೆ ಹಲವು ಹವ್ಯಾಸಗಳ ಸ್ನೇಹಿಯಾಗಿರುವ ಈಕೆ ಕರಾವಳಿ ಪ್ರತಿಭೆ ನಿಶಾ ಬಿ.ರಾವ್. ಮಂಗಳೂರಿನ ಉರ್ವಾದ ಡಾ.ರಮಾನಂದ ರಾವ್ ಮತ್ತು ಲಲಿತಾ ಕಲ್ಕೂರ್ ಅವರ ಮುದ್ದಿನ ಪುತ್ರಿಯಾದ ನೇಹಾಳ ಮನೆಯೇ ಸಂಗೀತ ಕುಟುಂಬ. ತಾಯಿ ಸಂಗೀತದಲ್ಲಿ ಪಳಗಿದ್ದುದರಿಂದ ಈ ಕ್ಷೇತ್ರ ಈಕೆಯತ್ತ ಬಾಲ್ಯದ ಹರೆಯದಲ್ಲೇ ಸೆಳೆಯಿತು. ತನ್ನ ಆರನೇ ವಯಸ್ಸಲ್ಲಿ ಮಧುರ ಕಂಠದಿಂದ ಹಾಡಲು ಪ್ರಾರಂಭಿದ ನೇಹಾ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತದಲ್ಲಿ ಪರಿಪೂರ್ಣಳಾದಳು. ಈಗಾಗಲೇ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಮುಗಿಸಿದ್ದು ಹಲವೆಡೆ ಸಂಗೀತದ ಕಂಠವನ್ನು ಹರಿಸಿರುವಳು. ಒಂದನೇ ತರಗತಿಯಿಂದಲೇ ಭರನಾಟ್ಯ ಕಲಿಕೆ. ಗುರುಗಳಾದ ವಿದುಷಿ ಸುಮಂಗಲಾ ರತ್ನಾಕರ್ ಗರಡಿಯಲ್ಲಿ ಪಳಗುತ್ತಿರುವ ಈ ಪ್ರತಿಭೆ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌...