Posts

Showing posts from 2013
Image
ಯುವ ಪ್ರತಿಭೆಯ ಗಾಯನ  ಸಿಂಚನ ಇವರು ಪ್ರಬುದ್ದ ಕಂಠದ ಹಾಡುಗಾರ್ತಿ. ತನ್ನ ಹಾಡಿನ ಮುಖೇನವೇ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವ ಪ್ರತಿಭೆ. ವೇದಿಕೆಯ ಎದುರು ಅದೆಷ್ಟೇ ಪ್ರೇಕ್ಷಕರಿದ್ದರೂ ನಿರ್ಭೀತಳಾಗಿ ಹಾಡುವ ಚಕ್ಯತೆ. ಅಂದ ಹಾಗೆ ಈ ಗಾನಸುದಾಮಣಿಯ ಹೆಸರು ಸಿಂಚನ್ ದೀಕ್ಷಿತ್. ಊರು ಉದ್ಯಾನನಗರಿ ಬೆಂಗಳೂರು. ಬಾಲ್ಯದಲ್ಲಿ ಸಂಗೀತದತ್ತ ತುಸು ಜಾಸ್ತಿ ಒಲವು. ಇದಕ್ಕೂ ಕಾರಣವಿದೆ, ಸೋದರತ್ತೆ ನಿರ್ಮಲಾ ಕುಲಕರ್ಣಿ ಪ್ರಬುದ್ದ ಗಾಯಕರು. ಅಲ್ಲದೆ ಮುತ್ತಜ್ಜ ಕೃಷ್ಣಮೂರ್ತಿ ಪುರಾಣಿಕ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದವರು. ತುಂಬು ಕುಟುಂಬದಲ್ಲಿ ಬೆಳೆದ ಸಿಂಚನ್‌ರಿಗೆ ಸಹಜವಾಗಿಯೇ ಸಂಗೀತ ಬೆನ್ನು ಹತ್ತಿತು. ಬಾಲ್ಯದಿಂದಲೇ ಗೀತಾ ಹೆಗ್ಡೆ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಹೆಚ್ಚಿನ ಕಲಿಕೆಗಾಗಿ ಹೊಂಬಾಳೆ ಪ್ರತಿಭಾ ರಂಗವನ್ನು ಸೇರಿಕೊಂಡರು. ಇಲ್ಲಿ ಎಚ್. ಫಲ್ಗುಣ ಅವರು ಸುಗಮ ಸಂಗೀತಕ್ಕೆ ತಳಹದಿಯನ್ನು ಕಲಿಸಿಕೊಟ್ಟರು. ಇಲ್ಲಿಂದ ವೇದಿಕೆಯಲ್ಲಿ ಮೈಕ್ ಹಿಡಿದು ನಾನೂ ಹಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತಂತೆ. ರಿಯಾಲಿಟಿಯ ’ರಿಯಲ್’ ಟಚ್: ಈ ಟಿ.ವಿ ಕನ್ನಡದಲ್ಲಿ ಪ್ರಸಾರವಾಗಿತ್ತಿದ್ದ ’ಎದೆ ತುಂಬಿ ಹಾಡಿವೆನು’ ಎಂಬ ರಿಯಾಲಿಟೀ ಶೋ ಮುಖೇನ ಪರಿಚಿತರಾದ ಸಿಂಚನ್‌ರಿಗೆ ಮುಂದಿನ ದಿನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ..! ತನ್ನ ಮೊದಲ ಹಾಡಿನಲ್ಲೇ ೧೦೦ ಅಂಕ ಗಿಟ್ಟಿಸಿಕೊಂಡ ಇವರು, ಗಾಯಕ ಎಸ್.ಪಿ ಬಾಲಸುಬ್ರಹ್ಮ...
Image
ಪುತ್ತೂರ ಹುಡುಗಿಯ ಸಾಧನೆ ಹತ್ತೂರು ಮೆಚ್ಚುವಂತದ್ದು ಹಾವು ಎಂದರೆ ಅಬ್ಬಾ..! ಎಂದು ಹೇಳೋರೇ ಹಲವರು. ಆದರೆ ಈ ಹುಡುಗಿ ಎಲ್ಲರಿಗಿಂತಲೂ ಬಿನ್ನ. ತನ್ನ ಚಿಕ್ಕ ವಯಸ್ಸಲ್ಲೇ ಹಾವು ಈಕೆಯ ಪ್ರಿಯ ಮಿತ್ರ. ಮೈಕ್ ಹಿಡಿದು ಹಾಡು ಎಂದರೆ ಅದಕ್ಕೂ ಓ.ಕೆ. ಭರತನಾಟ್ಯ ತುಂಬಾನೇ ಸಲೀಸು. ನಟನೆಗೂ ಸೈ. ಅಂದ ಹಾಗೆ ಈ ಸರ್ಪ ಸುಂದರಿಯ ಹೆಸರು ಹಸ್ತಾ ಐತಾಳ್. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸಿಸುವ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ್ ಮತ್ತು ಶ್ರೀಮತಿ ವಸಂತಿ ದಂಪತಿಯರ ಪುತ್ರಿಯಾದ ಹಸ್ತಾಳಿಗೆ ಹಾಡು ಎಂದರೆ ಪ್ರಿಯ ಕ್ಷೇತ್ರ. ತನ್ನ ಹಸ್ತದಿಂದ ಮೈಕ್ ಹಿಡಿದು ಹಾಡಿದಳೆಂದರೆ ಸಾಕು ಚಪ್ಪಾಳೆಗಳ ಸುರಿಮಳೆ..! ಮುಖದಲ್ಲಿ ಪುಟ್ಟ ಪುಟ್ಟ ಮುಗುಳ್ನಗೆಯೊಂದಿಗೆ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾ, ಹುಚ್ಚೆಂದು ಕುಣಿಸುವ ಹಾಡಿನ ಪರಿ ಈ ಪ್ರತಿಭೆಯಲ್ಲಿದೆ. ಏಳನೇ ವಯಸ್ಸದಲ್ಲೇ ಸುಗಮ ಸಂಗೀತದ ಜಾಡನ್ನು ಹಿಡಿದ ಹಸ್ತಾಳ ಗುರುಗಳು ಕಿರಣ್ ಕುಮಾರ್. ಶಾಸ್ತ್ರೀಯ ಸಂಗೀತವನ್ನು ಸ್ವರ್ಣಲತಾ ಎಂ ಭಟ್ ಅವರಲ್ಲಿ ಕಲಿಕೆ. ಜೊತೆಗೆ ಚಲನಚಿತ್ರ ಗೀತೆಯನ್ನು ಚಂದ್ರಶೇಖರ ಹೆಗ್ಡೆ ಅವರಲ್ಲಿ ಕರಗತ ಮಾಡಿಕೊಂಡಿರುವಳು. ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದ ಬಾರಿಸು ಕನ್ನಡ ಡಿಂಡಿಮವ ತಂಡದ ಸಕ್ರೀಯ ಪ್ರತಿಭೆಯಾದ ಹಸ್ತಾಳು ಇಲ್ಲಿ ವರೆಗೆ ನೀಡಿದ ಪ್ರದರ್ಶನ ಸುಮಾರು ಐದು ನೂರರ ಸನಿಹ..! ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಲಿಟ್ಲ್ ಸ್ಟಾರ್ ಸಿಂಗರ್...
Image
                                     ಸುಂದರ ಕಡಲಿನ ಜೊತೆ ಕೂಸಳ್ಳಿ ನರ್ತನ ಪ್ರಶಾಂ ತ ವಾತಾ ವರಣದ ನಡುವೆ ಸಮುದ್ರದ ಅಬ್ಬರ. ನಿಮಿಷಕ್ಕೊಮ್ಮೆ ಅಲೆಗಳ ನರ್ತನ. ಸಂಜೆಯಂತೂ ಸೂರ್ಯನೇ ದರೆಗಿಳಿದ ಅನುಭವ. ನಿವೂ ಇಂತಹಾ ಅನುಭ ವಕ್ಕೆ ಸಾಕ್ಷಿಯಾಗಬೇಕಾದರೆ ಒಮ್ಮೆಯಾದರೂ ಒತ್ತಿನೆಣೆ ಬೀಚ್‌ನತ್ತ ಪಯಣಿಸಲೆಬೇಕು. ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು ೪೦ ಕಿಲೋ ಮೀಟರ್ ಕ್ರಮಿಸಿದರೆ ಬೈಂದೂರು ಪಟ್ಟಣ ಸಿಗುತ್ತದೆ. ಇಲ್ಲಿಂದ ಕೇವಲ ೨ ಕಿಲೋಮೀಟರ್ ಸಾಗಿ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ಕೊಂಚ ದೂರ ಕ್ರಮಿಸಿದರೆ ಸಾಕು ಕ್ಷಿತಿಜ ನಿಸರ್ಗಧಾಮ ಬಂದೇ ಬಿಡುತ್ತದೆ. ಅಲ್ಲದೆ ಇಲ್ಲಿ ಪ್ರಶಾಂತ ವಾತಾವರಣದ ನಡುವೆ ಉಳಿದುಕೊಳ್ಳಬೇಕೆಂದರೆ ಬಾಡಿಗೆಗೆ ರೂಮ್ ಕೂಡಾ ಲಭ್ಯ. ಕೊಠಡಿಗಳು ಸಮುದ್ರ ವೀಕ್ಷಣೆಗೆ ಹಂದಿಕೊಂಡಿದ್ದು ಬೀಚ್‌ನ ಪ್ರತೀ ಕಿನಾರೆಯನ್ನೂ ಸವಿಯಬಹುದು. ಅಲ್ಲದೆ ಇಲ್ಲಿನ ಗುಡ್ಡದ ಮೇಲಿನಿಂದ ವಿಶಾಲವಾದ ಕಡಲನ್ನು ನೋಡುವುದು ನಿಜಕ್ಕೂ ಅಚ್ಚಳಿಯದೇ ಉಳಿಯುವುದು. ಸಮುದ್ರದ ದಡಕ್ಕೆ ಇಳಿಯಬೇಕೆಂದಿದ್ದರೆ ಮೆಟ್ಟಿಲುಗಳ ಮೂಲಕ ಪಯಣ. ಛಾಯಾಗ್ರಹಣಕ್ಕೆ ಇದು ಹೇಳಿ ಮಾಡಿಸಿದ ಜಾಗ. ಸಂಜೆ ಆಗುತ್ತಿದ್ದಂತೆಯೇ ಸೂರ್ಯ ಮರೆಯಾಗುವ ದೃಶ್ಯವನ್ನ...
Image
                    'ವೃಂದಾ'ನ್ವೇಷಣೆ ಶಾಸ್ತ್ರೀಯ ಕಲೆಯಾದ ಭರತನಾಟ್ಯ ಇರಲಿ, ಗಂಡುಕಲೆ ಯಕ್ಷಗಾನ ಇರಲಿ ಈಕೆಗೆ ಸಲೀಸು. ವೇದಿಕೆಯಲ್ಲಿ ಮೈಕ್ ಹಿಡಿದು ಹಾಡು ಹಾಡಬೇಕೆಂದರೂ ಸೈ ಎನ್ನುತ್ತಾಳೆ. ಅಷ್ಟೇ ಏಕೆ ಚಿತ್ರಕಲೆಯಲ್ಲೂ  ಪರಿಣತಿ. ಇದಲ್ಲದೆ ಕ್ರೀಡೆ, ಕ್ವಿಝ್ ಸ್ಪರ್ಧೆಯಲ್ಲೂ ಸಾಧನೆ. ಬಾಲ್ಯದಲ್ಲೇ ಕಲಾ ಕ್ಷೇತ್ರದತ್ತ ಅತೀವ ಒಲವಿರುವ  ಕರಾವಳಿ ಬೆಡಗಿ ವೃಂದಾ ಕೊನ್ನಾರ್.                                                 ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೈಕಂಪಾಡಿಯ ಬಿ. ಸುಬ್ಬ ರಾವ್ ಮತ್ತು ಶ್ರೀಮತಿ ವಿದ್ಯಾ ದಂಪತಿಯರ ಪುತ್ರಿಯಾದ ವೃಂದಾಳಿಗೆ ಯಕ್ಷಗಾನದತ್ತ ಆಸಕ್ತಿ ಬರಲು ಕಾರಣ ಈಕೆಯ ತಂದೆಗೆ ಕಲಾ ಕ್ಷೇತ್ರದ ಮೇಲಿದ್ದ ಪ್ರೀತಿ. ಅಲ್ಲದೆ ತಾವೂ ಯಕ್ಷಗಾನ ಕಲಾವಿದರಾಗಿದ್ದು ಮಗಳು ಕೂಡಾ ಈ ವಲಯದಲ್ಲಿ ಮುಂದುವರಿಯಬೇಕೆಂಬ ಹಂಬಲವಿತ್ತು. ಈಕೆಗೆ ಹತ್ತು ವರ್ಷವಿರುವಾಗಲೇ ಯಕ್ಷಗಾನ ಕಲೆಯತ್ತ ಆಸಕ್ತಿ ಹುಟ್ಟಿತು. ಇವಳ ಆಸಕ್ತಿಗೆ ನೀರೆರೆದು ಪೋಷಿಸಿದವರೆಂದರೆ ಗುರುಗ ಳಾದ ಶಂ...
Image
                                                ಬಿಗ್‌ಬಾಸ್ ವೇದಿಕೆಯಿಂದ 'ಶ್ವೇತಾ'ಗಮನ                            ಸ್ವಲ್ಪ ತರಲೆ, ಸ್ವಲ್ಪ ಕೋಪ, ಚೂರು ಬೇಜಾರು, ಸಿಕ್ಕಾಪಟ್ಟೆ ಫನ್ ಇವೆಲ್ಲಾ ಒಂದೇ ವೇದಿಕೆಯಲ್ಲಿ ಸಿಗಬೇಕಾದರೆ ಬಿಗ್‌ಬಾಸ್ ರಿಯಾಲಿಟೀ ಷೋನ ನೋಡಲೇಬೇಕು. ಈ ವಿಷಯ ಈಗ ಯಾಕೆ ಅಂದ್ಕೊಂಡ್ರಾ..? ಅಂದ ಹಾಗೆ ಈಗ ಹೇಳಲಿಕ್ಕೆ ಹೊರಟಿರೋದು ಇತ್ತೀಚೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಶ್ವೇತಾ ಪಂಡಿತ್ ಬಗ್ಗೆ.    ಕಡಲತಡಿಯ ಈ ಹುಡುಗಿ ತನ್ನ ಬಾಲ್ಯಕಳೆದದ್ದು ಮೂಡಬಿದಿರೆಯಲ್ಲಿ. ಎಳೆಯಲ್ಲೇ ಶಾಸ್ತ್ರೀಯ ಕಲೆ ಭರತನಾಟ್ಯದತ್ತ ಅಪಾರ ಒಲವು. ಸ್ಮಿತಾ ಭಟ್ ಅವರಲ್ಲಿ ಕೆಲಕಾಲ ಕಲಿಕೆ. ಮುಖದ ಹಾವ-ಬಾವ ಮುದ್ರೆಗಳ ಬಗೆಗೆ ಕಲಿತ ಶ್ವೇತಾಳಿಗೆ ನಟನೆಯ ಸಮಯದಲ್ಲೂ ಇದು ತುಂಬಾನೇ ಸಹಾಯವಾಯಿತಂತೆ.                 ...
Image
                                                           ಶ್ರವಂತ್ ಶ್ರಾವಂತಿಕೆ                           ಕಿರುತೆರೆಯಿಂದ ಪರಿಚಯವಾದ ಅದೆಷ್ಟೋ ಪ್ರತಿಭೆಗಳು ಇಂದು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಮೊನ್ನೆ ಮೊನೆ ಟಿ.ವಿ ಪರದೆ ಮುಂದೆ ಹಾಯ್... ಹಲೋ .. ಅನ್ನುತ್ತಿದ್ದ ಹುಡುಗ ಇಂದು ನಾಯಕ ನಟನಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾನೆ. ಹೌದು ಅಂದ ಹಾಗೆ ಈಗ ಹೇಳಲಿಕ್ಕೊರಟಿರುವುದು ಪರಾರಿ ಚಲನಚಿತ್ರದ ನಾಯಕ ನಟ ಶ್ರವಂತ್ ರಾವ್ ಅವರ ಬಗ್ಗೆ. ಬಾಲ್ಯದಿಂದಲೇ ಈತನಿಗೆ ಉತ್ತಮ ನಟನಾಗುವ ಬಯಕೆ ಇತ್ತು. ಅಷ್ಟಲ್ಲದೆಯೂ ಚಿತ್ರರಂಗದ ವಾತಾವರಣದಲ್ಲೇ ಬೆಳೆದ ಹುಡುಗ.  ಈತನ ತಾತ ವಾಸುದೇವ ರಾವ್ ಮತ್ತು ತಂದೆ ಮಂಜುನಾಥ ಅವರು ನಡೆಸುತ್ತಿದ್ದ ಸಫಾರಿ ಪ್ರೊಡಕ್ಷನ್‌ನಲ್ಲಿ ಅನೇಕ್ ಹಿಟ್ ಚಿತ್ರ ತೆರೆಕಂಡಿದೆ. ಮುಂದಿನ ದಿನದಲ್ಲಿ ಈ ಪ್ರೊಡಕ್ಷನ್ ಲಾಸ್ ಆದಾಗ ತಾನು ಚಿತ್ರರಂಗಕ್ಕೆ ಬರಲು ಈತ ಆರಿಸಿದ್ದು  ಆಂಕರಿಂಗ್ ಕ್ಷೇತ್ರ. ಸತತ ಆರು ವರ್ಷಗಳ ಕಾಲ ಖಾಸ...
Image
                                        ಚಲನಚಿತ್ರ ವಲಯದ 'ಲಿಖಿತ' ಪ್ರತಿಭೆ ಸ್ಪಷ್ಟ ಗುರಿ ಮತ್ತು ಸತತ ಪರಿಶ್ರಮವಿದ್ದರೆ ಯಾವುದೇ ರಂಗದಲ್ಲೂ ಮಿಂಚಲು ಸಾಧ್ಯವಿದೆ ಎಂಬುದು ಇವರಿಂದ ರೂಪಿತವಾಗಿದೆ. ಕ್ಯಾಮರಾ ಮುಂದೆ ಕಿಂಚಿತ್ತೂ ಭಯವಿಲ್ಲದೆ  ಲವ-ಲವಿಕೆಯಿಂದ ಮಾತನಾಡಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮಾತಿನ ಲಹರಿ ಈತನದು. ಈಗ ಹೇಟಲಿಕ್ಕೆ ಹೊರಟಿರುವುದು ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನಲ್ಲಿ ತನ್ನ ಮನೋಜ್ಞ ನಟನಾ ಸಾಮಥ್ಯವನ್ನು ಪ್ರದರ್ಶಿಸಿರುವ ಕುಡ್ಲದ ಪ್ರತಿಭೆ ಲಿಖಿತ್ ಶೆಟ್ಟಿಯ ಬಗ್ಗೆ.       ಅಂದ ಹಾಗೆ ಈತನ ಕುಟುಂಬದಲ್ಲಿ ಯಾರೂ ಚನನಚಿತ್ರ ರಂಗದಲ್ಲಿಲ್ಲ. ಆದರೆ ಲಿಖಿತ್‌ಗೆ ಭವಿಷ್ಯದಲ್ಲಿ ಸಿನಿಮಾ ನಟನಾಗಬೇಕೆಂಬ ಆಸೆ ಬಾಲ್ಯದಲ್ಲೇ ಇತ್ತು. ಮಣಿಪಾಲ ಸಮೀಪದ ಹಿರಿಯಡ್ಕ ಊರಿನ ಪ್ರಕಾಶ್ ಚಂದ್ರ ಶೆಟ್ಟಿ ಮತ್ತು ಶಾಲಿನಿ ಪಿ. ಶೆಟ್ಟಿ ದಂಪತಿಯರ ಪುತ್ರರಾದ ಲಿಖಿತ್ ಸಧ್ಯ ನೆಲೆಸುತ್ತಿರುವುದು ಸಿಲಿಕಾನ್ ಸಿಟಿಯಲ್ಲಿ.       ಚಿತ್ರರಂಗದ ಕಡೆ ಒಲವಿದ್ದ ಇವರಿಗೆ ಮೊದಲು ಅವಕಾಶ ನೀಡಿದ್ದು ಉದಯ ವಾಹಿನಿ. ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿದ ಲಿಖಿತ್ ಈ ವಾಹಿನಿ ಆರಿಸಲೂ ಕ...
Image
                                                                    'ಗಗನ'ವೇ ಬಾಗಿ  ' ನೀನೊಬ್ಬ ಆಕ್ಟರ್ರಾ, ಸಿಂಗರ್ರಾ, ಕವಿಯಾ ಅಥವಾ ಭಾಷಣಕಾರನಾ? ಯಾರು ನೀನು? ಪುಟ್ಟ ಬಾಲಕನಲ್ಲಿ ಇವೆಲ್ಲಾ ಒಟ್ಟೊಟ್ಟಿಗೆ ಹೇಗೆ ಸಾಧ್ಯ? ಬಹುಷ: ಅತಿಮಾನುಷ ಶಕ್ತಿ ನಿನ್ನಲ್ಲಿರಬಹುದೇನೋ...’ ಎಂದು ಸ.ರಿ.ಗ.ಮ.ಪ ಲಿಟ್ಲ್ ಚಾಂಫ್ಸ್ ಪೈನಲ್‌ವೇದಿಕೆಯಲ್ಲಿ ನೆರೆದಿದ್ದ ಸಾವಿರರು ಪ್ರೇಕ್ಷಕರ ಮುಂದೆ ಖ್ಯಾತ ಬಹುಭಾಷಾ ಹಿನ್ನಲೆ ಗಾಯಕಿ ಉಷಾ ಉತ್ತುಪ್ ಅವರು ಹರಸುತ್ತಿರುವಾಗ ವಿಧಯನಾಗಿ ಕಾಲಿಗೆರಗಿ ’ಆಶೀರ್ವದಿಸಿ ಮೇಡಂ’ ಎಂದು ಪುಟ್ಟ ಹುಡುಗನೊಬ್ಬ ಕೇಳಿಕೊಳ್ಳುತ್ತಿದ್ದ. ಅಂದ ಹಾಗೆ ಈ ಪುಟ್ಟ ಪೋರನ ಹೆಸರು ಗಗನ್ ಗಾಂವ್ಕರ್. ಹೌದು, ಈತನಿಗಿಂದು ರಾಜ್ಯಾದ್ಯಂತ ಪ್ಯಾನ್. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಈತನನ್ನು ಇಷ್ಟ ಪಡುವವರೇ ಇದಕ್ಕೆ ಕಾರಣ ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಲಿಟ್ಲ್ ಚಾಂಫ್ಸ್...
Image
                                                       ಗೌತಮ್‌ನ ಸಾಧನೆ ಗಗನದೆತ್ತ ಈತ ಪಕ್ಕಾ ಗ್ರಾಮೀಣ ಪ್ರತಿಭೆ. ಎಳೆ ಪ್ರಾಯದಲ್ಲಿ ಭವಿಷ್ಯದಲ್ಲಿ ನಾನೊಬ್ಬ ಸ್ವಿಮ್ಮರ್ ಆಗುತ್ತೇನೆ ಎಂಬ ಕನಸೂ ಕಂಡಿರಲಿಕ್ಕಿಲ್ಲ. ಬಾಲ್ಯದಲ್ಲಿ ಹಾಗೆ ಸುಮ್ಮನೆ ಕಾಲ ಕಳೆಯಲೆಂದು ಈಜುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದ. ಈತನ ಆಸೆಯನ್ನು ಗಮನಿಸಿ ಪೋಷಕರು ಇನ್ನಷ್ಟು ಪ್ರೋತ್ಸಾಹ ಹಾಗೂ ತರಭೇತಿ ನೀಡಿದರೆ ಹೇಗೆ ಎನ್ನುವ ಯೋಚನೆಯಲ್ಲಿ ತೊಡಗಿದರು. ಮೊದಲೇ ಸ್ವಿಮ್ಮಿಂಗ್ ವಲಯ ಪರಿಚಯವಿದ್ದ ಈತನ ತಂದೆ ತರಭೇತಿ ನೀಡಲು ಅಣಿಯಾದರು. ಮೊದ ಮೊದಲು ತಂದೆಯ ಗರಡಿಯಲ್ಲೇ ಪಳಗಿದ ಈ ಪ್ರತಿಭೆ ಇಂದು ರಾಜ್ಯ ಮಟ್ಟದ ಪ್ರತಿಭಾವಂತ ಈಜುಗಾರನಾಗಿ ರೂಪುಗೊಂಡಿದ್ದಾನೆ. ಅಂದ ಹಾಗೆ ಈತನ ಹೆಸರು ಗೌತಮ್.            ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರಿನ ಪುರಂದರ ಮತ್ತು ಹೇಮಾಮಾಲಿನಿ ದಂಪತಿಯ ಪುತ್ರನಾದ ಗೌತಮ್ ತನ್ನ ಐದನೇ ವಯಸ್ಸಿಗೆ ಸ್ವಿಮ್ಮಿಂಗ್ ಕಲಿಕೆ ಆರಂಭಿಸಿದ. ಪ್ರತ...
Image
                                                              ಅಯನಾಳ ಕಲಾಪಯಣ            ಈ ಪುಟಾಣಿ ಸಾಮಾನ್ಯಳಂತವಳಲ್ಲ. ಏಕಕಾಲದಲ್ಲಿ ಎರಡೂ ಕೈಯಿಂದ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), ೬೦ ಸಂವ ತ್ಸರಗಳ ಹೆಸರನ್ನು ಪಟಪಟನೆ ಹೇಳುವ ಚತುರಳೀಕೆ. ಅಷ್ಟೇಕೆ ೭೨ ಮೇಳಕರ್ತ ರಾಗ ಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ, ಆರೋಹಣ-ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳು. ಅಲ್ಲದೆ ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು ನಿರರ್ಗಳವಾಗಿ ಹೇಳಬಲ್ಲ ಈ ಚತುರೆಯ ಹೆಸರು ಆಯನಾ.           ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸಿಸುವ ಈಕೆ  ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತ...
Image
        ಕಲಾ ವಲಯದ ಅಕ್ಷಯ ಪಾತ್ರೆ                                ಯಾವುದೋ ಒಂದು ಕ್ಷೇತ್ರದಲ್ಲಿ ಪ್ರತಿಭೆ ಎಂದು ಗುರುತಿಸಿಕೊಳ್ಳುವುದು ಸಹಜ. ಆದರೆ ಈ ಪ್ರತಿಭೆಯ ಮೇಲೆ ಕಲಾಶಾರದೆಯ ಒಲವು ಎಷ್ಟಿದೆ ಎಂದರೆ ಬಾಲ್ಯದಲ್ಲೇ ಕಲಾವಲಯವು ಈಕೆಯತ್ತ ಸೆಳೆಯಿತು. ಭರತನಾಟ್ಯ, ಸಂಗೀತ, ಕವನ ವಾಚನ, ಗೈಡ್ಸ್, ರಂಗೋಲಿ .. ಅಬ್ಬಾ..! ಒಂದಾ ಎರಡಾ..! ಹೀಗೆ ಹಲವು ಕಲಾ ಪ್ರಕಾರವನ್ನು ಎಳೆ ಪ್ರಾಯದಲ್ಲೇ ವರಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಬಾಚಿದ ಈಕೆಯ ಹೆಸರು ಅಕ್ಷತಾ ಕೊಂಕೋಡಿ.            ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಈಕೆಯ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಮುಂದು. ಆ ತರೇನ ಮಗಳೂ ಕೂಡಾ ಬಹುಮುಖಿಯಾಗಿ ರೂಪುಗೊಂಡಳು. ಈಕೆಯ ಕಣ್ಣಿಗೆ ಮೊದಲು ಬಿದ್ದದ್ದು ಸಂಗೀತ ಕ್ಷೇತ್ರ. ತಾನು ಚಿಕ್ಕಂದಿನಲ್ಲಿರುವಾಗಲೇ ಹಾಗೊಮ್ಮೆ ಹೀಗೊಮ್ಮೆ ಹಾಡು ಗುನುಗುತ್ತಿದ್ದಳು. ಆದರೆ ಮೂರನೇ ತರಗತಿಯಲ್ಲಿ ಪ್ರತಿಭಾ ಕಾರಂಜಿಗೆ ಸ್ಪರ್ಧಿಸುವುದರ ಜೊತೆ ಪ್ರಥಮ ಸ್ಥಾನ ತೆಗೆದೇ ಬಿಟ್ಟಳು, ಅಲ್ಲಿಂದ...