Posts

Showing posts from July, 2012
Image
                                          ರಂಝಾನ್ ಆಚರಣಾ ವಿಶೇಷ ಮಾನವ ಕುಲಕ್ಕೆ ಅಥವಾ ಯಾವುದೇ ಜೀವಿಗಳಿಗೆ ಹಸಿವು ಎಂಬುದು ಬಹಳ ಮರ್ಮ ಪ್ರಧಾನವಾದದ್ದು. ಹಸಿದ ಒಬ್ಬ ವ್ಯಕ್ತಿಗೆ ಇನ್ನೊಬ್ಬರ ಕಷ್ಟ ನೋವಿನಬಗ್ಗೆ ಬಹು ಬೇಗ ಅರಿವು ಮೂಡುತ್ತದೆ. ಮಾನವನು ಹಸಿದವನಾಗಿದ್ದರೆ ಬಹುಬೇಗ ಜಗತ್ತಿನ ಕಷ್ಟ-ಕಾರ್ಪಣ್ಯಗಳ ಬಗ್ಗೆ ಅರಿವಾಗುತ್ತದೆ. ಇದಕ್ಕೆ ಉತ್ತಮಉದಾಹರಣೆಯಾಗಿದೆ ರಂಝಾನ್ ಮಾಸದಲ್ಲಿ ಮುಸ್ಲಿಂ ಭಾಂಧವರು ಆಚರಿಸುವ ಉಪವಾಸ ಕ್ರಮ. ಪ್ರವಾದಿ ಮಹಮ್ಮದ್ ಮುಸ್ತಫಾ(ಸ.ಅ) ಸ್ವಲ್ಲಂ ೧೪೦೦ ವರ್ಷಗಳ ಹಿಂದೆ ತನ್ನ ಉಮ್ಮತ್ (ಅನುಯಾಯಿಗಳ) ಈ ಕ್ರಮವನ್ನು ಕಲಿಸಿಕೊಟ್ಟರು. ಅರಬೀ ಮಸದ ಪ್ರಕಾರ ಶಅಬಾನ್ ಮಾಸದ ಚಂದ್ರಾಸ್ತಮಾನಗೊಂಡು ರಂಝಾನ್ ಮಾಸದ ಚಂದ್ರೋದಯವಾದಾಗ ಉಪವಾಸದ ತಿಂಗಳು ಆರಂಭವಾಗುತ್ತದೆ. ಎಲ್ಲದಕ್ಕೂ ಕಾಲಾವಕಾಶಗಳ ಮಿತಿಗಳಿರುವಂತೆ ಈ ಉಪವಾಸ ವೃತಕ್ಕೂ ನಿಭಂಧನೆಗಳಿವೆ. ಮುಸ್ಲಿಂ ಭಾಂಧವರು ಈ ಕ್ರಮವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ರಂಝಾನ್ ತಿಂಗಳ ಪ್ರತೀ ದಿನದಲ್ಲೂ ಸೂರ್ಯೋದಯಕ್ಕೆ ಮುಂಚಿತವಾಗಿ ಆಹಾರ ಪಾನೀಯಗಳನ್ನು ಉಪಯೋಗಿಸುತ್ತಾರೆ. ಸೂರ್ಯೋದಯದಿಂದ ನಂತರ ಸೂರ್ಯಾ...
Image
            ಶೋಭಿಸುತ್ತಿರುವ ಸುಶೋಭಿತಾ       ಕ್ರಿಯಾಶೀಲತೆ ಮತ್ತು ಸೃಜನಶೀಲತೆಯು ಜೊತೆಗಿದ್ದರೆ ಯಶಸ್ಸಿನೆಡೆಗೆ ತಾನಾಗೆ ಮುಂದುವರೆಯಬಹುದು ಎಂಬುದಕ್ಕೆ ಈಕೆ ಸ್ಪಷ್ಟ ಸಾಕ್ಷಿ. ಭರತನಾಟ್ಯ, ಹಾಡುಗಾರಿಕೆ, ಕ್ರೀಡಾ ವಲಯ ಸೇರಿದಂತೆ ಇತರೇ ಕಲಾ ಚಟುವಟಿಕೆಗಳಲ್ಲಿ ಸಕ್ರೀಯಳಾಗಿರುವ ಈಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರ ಹುಡುಗಿ ಸುಶೋಭಿತಾ.       ಈಕೆ ಸಂಗೀತದತ್ತ ಚಿತ್ತ ಹರಿಸಿದ್ದು ಏಳನೇ ವಯಸ್ಸಲ್ಲಿ. ಶಾಸ್ತ್ರೀಯ ಸಂಗೀತದ ಪ್ರಮುಖ ತಳಹದಿ ಹಾಕಿದವವರು ದಿವಗಂತ ವಿಧ್ವಾನ್ ಶ್ರೀ ಕಾಂಚನ ನಾರಾಯಣ ಭಟ್. ಮುಂದಿನ ಪಯಣ ಮುಂದುವರೆದದ್ದು ವಿಧೂಷೀ ಶ್ರೀಮತಿ ವೀಣಾ ರಾಘವೇಂದ್ರರವರಲ್ಲಿ. ಸುಗಮ ಸಂಗೀತವೂ ಈಕೆಯ ಮೆಚ್ಚಿನ ಕ್ಷೇತ್ರ. ಮೊದಲು ಕಿರಣ್ ಕುಮಾರ್ ರವರಲ್ಲಿ ಪಳಗಿದ ಸುಶೋಭಿತಾ ಮುಂದೆ ಸ್ವಂತ ಕಾಲಲ್ಲಿ ನಿಲ್ಲಲು ಪ್ರಾರಂಬಿಸಿದಳು.      ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಗ್ರೇಡ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಸದ್ಯ ಸೀನಿಯರ್ ಗ್ರೇಡ್‌ನ ಪರಿಕ್ಷಾ ಹಂತದಲ್ಲಿರುವಳು. ಪಿ.ಯು.ಸಿ ಯಲ್ಲಿರುವಾಗ  ಯುನಿವರ್ಸಿಟಿ ವಲಯದವರು ಆಯೋಜಿಸಿದ ರಾಜ್ಯಮಟ್ಟದ ಗಾನ ಸ್ಪರ್ದೆಯಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಹಂತದಲ್ಲಿ ಪ್ರಥಮ ಸ್ಥಾನ, ಮಂಡ್ಯದಲ್ಲಿ ನಡೆದ...
Image
                                      'ವರ್ಷಾ' ಕ್ರೀಡಾರಂಗದ ಹರ್ಷ             ಬಾಲ್ಯದಿಂದಲೇ ಈಕೆಗೆ ವಾಲಿಬಾಲ್ ಕ್ರೀಡೆ ಎಂದರೆ ಪಂಚಪ್ರಾಣ. ಶಾಲಾ ಮಟ್ಟದ ವಾಲಿಬಾಲ್ ಟೀಂ ನ ನಾಯಕಿಯೂ ಹೌದು. ಜೊತೆ ಉತ್ತಮ ಸ್ಮಾಷರ್ ಮತ್ತು ಬೆಸ್ಟ್ ಅಟ್ಯಾಕರ್. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರಾಷ್ಟ್ರಮಟ್ಟವನ್ನು ಪ್ರತಿನಿದಿಸುತ್ತಿದ್ದಳು. ಆದರೆ ಏಳನೇ ತರಗತಿಯಲ್ಲಿ ಈ ಅವಕಾಶ ಈಕೆಯ ಕೈ ತಪ್ಪಿತು. ಇಷ್ಟಕ್ಕೇ ಸುಮ್ಮನಾಗದೆ ತನ್ನ ಪಥವನ್ನು ಬದಲಿಸಿ ಅಥ್ಲೆಟಿಕ್ ರಂಗದಲ್ಲಿ ರಾಷ್ಟ್ರಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆಯ ಹೆಸರು ವರ್ಷಾ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾದ ನಿವಾಸಿಯದ ಈಕೆ ರೊಹಿತ್ ಪೂಜಾರಿ ಮತ್ತು ವಾಣಿ ದಂಪತಿಯರ ಮಗಳು. ತಾಯಿ ಸ್ವತಃ ಅಥ್ಲೆಟಿಕ್ ರಂಗದಲ್ಲಿ ಪಳಗಿರುವುದರಿಂದ ಬಾಲ್ಯದತ್ತವಾಗೇ ಈಕೆಗೆ ಕ್ರೀಡಾಸಕ್ತಿ ಮೈಗೂಡಿತು. ಬ್ರೇಕ್ ಕೊಟ್ಟ ಸಲಹೆ: ಚಿಕ್ಕಂದಿನಲ್ಲೇ ಈಕೆಯ ಆಸಕ್ತಿಯ ಕ್ಷೇತ್ರವಾಗಿದ್ದ ವಾಲಿಬಾಲ್ ಕ್ರೀಡೆಗೆ ತಂದೆ ಮತ್ತು ತಾಯಿ ಸಾಥ್ ನೀಡಿದರು. ಮುಂದೊಂದು ದಿನ ಈಕೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕೆಂಬ ಇರಾದೆಯೂ ಕೋಚ್ ಲೋರ್ನ್ ಜೋಮ್ಸ್‌ರವರಿಗೆ ಇತ್ತು. ಒಂಬತ್ತನೇ ವ...